ಕಮಲಶಿಲೆಯಲ್ಲಿ ಪ್ರಥಮ ದೇವರ ಸೇವೆ ಆಟ
ಲೇಖಕರು : ಉದಯವಾಣಿ
ಬುಧವಾರ, ನವ೦ಬರ್ 19 , 2014
|
ನವ೦ಬರ್ 19, 2014
|
ಕಮಲಶಿಲೆಯಲ್ಲಿ ಪ್ರಥಮ ದೇವರ ಸೇವೆ ಆಟ
ಸಿದ್ದಾಪುರ :
ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿà ದುರ್ಗಾಪರಮೇಶ್ವರಿ ಯಕ್ಷಗಾನ ದಶವತಾರ ಮೇಳವು ನ.17ರಂದು ಕ್ಷೇತ್ರದಲ್ಲಿ ಎರಡು ಮೇಳಗಳು ಪ್ರಥಮ ದೇವರ ಸೇವೆ ಆಟ ಆಡುವ ಮೂಲಕ 2014-15ನೇ ಸಾಲಿನ ತಿರುಗಾಟಕ್ಕೆ ಚಾಲನೆ ನೀಡಲಾಯಿತ್ತು.
|
ಎರಡು ರಂಗಸ್ಥಳದಲ್ಲಿ ಏಕಕಾಲದಲ್ಲಿ ಪ್ರಥಮ ದೇವರ ಸೇವೆ ಆಟಗಳು ಜರಗಿದವು.
|
ಶ್ರೀ ಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆ ಆಟದ ಅಂಗವಾಗಿ ಶ್ರೀ ಗಣಹೋಮ ಮತ್ತು ಶ್ರೀ ಮಹಾಗಣಪತಿ ಪೂಜೆ ಹಾಗೂ ಶ್ರೀ ಬ್ರಾಹ್ಮಿà ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜಾಧಿಗಳು ಜರಗದವು. ರಾತ್ರಿ 8.30ರಿಂದ ಮೇಳಗಳ ತಿರುಗಾಟದ ಉದ್ಘಾಟನಾ ಕಾರ್ಯಕ್ರಮ ಜರಗಿದವು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮೇಳಕ್ಕೆ ಅನೇಕ ಧಾನಿಗಳು ಬೆಳ್ಳಿ ಗಣಪತಿ, ಬೆಳ್ಳಿ ತ್ರಿಶೂಲ ಹಾಗೂ ಬೆಳ್ಳಿ ಇತರ ಆಯುಧಗಳು ಮತ್ತು ಯಕ್ಷಗಾನ ವೇಶದ ಪರಿಕರಕಗಳನ್ನು ದೇಣಿಗೆಯಾಗಿ ನೀಡಿದರು.
ರಾತ್ರಿ ಸಂಪ್ರದಾಯದಂತೆ ಚೌಕಿಯಲ್ಲಿ ಪೂಜೆ ನಡೆದ ಬಳಿಕ ದೇವಸ್ಥಾನದ ಎದುರು ಕಡೆ ಅಂಗಳದಲ್ಲಿ ನಿರ್ಮಿಸಿದ ಎರಡು ರಂಗಸ್ಥಳದಲ್ಲಿ ಏಕಕಾಲದಲ್ಲಿ ಪ್ರಥಮ ದೇವರ ಸೇವೆ ಆಟಗಳು ಜರಗಿದವು.
ಕೃಪೆ :
http://www.udayavani.com
|
|
|